ಗ್ರಾಮ ಒಂದು ಭೇಟಿ

ಯಾರಿಗೆ ಯಾರು ಬರಕೊಟ್ವ ಉಂಬಳಿ
ಈ ಗದ್ದೆ ಬಯಲು ಮನೆ ಮಠ
ಅ ಮುದುಕ ಹೊದ್ಡ ಕಂಬಳಿ ?

ಎರಡು ತಲೆಮಾರಿಗಿಂತ
ಹಿ೦ದಿಲ್ಲದ ಇತಿಹಾಸ
ಆದರೂ ಗುಡ್ಡದ ಕೆಂಗಣ್ಣ ದೇವತೆ
ಎಲ್ಲವನ್ನೂ ನೊಡಿದೆ

ಪಶ್ಚಿಮದ ಆಕಾಶ ರೇಖೆ
ಅರಬೀ ಸಮುದ್ರದ ಅಂಚು
ಈಚೆಗೆ ಘಟ್ಟಗಳ ಸಾಲು

ತಪ್ಪಲಿನ ಹುಲ್ಲು
ಹೊಂಬಣ್ಣಕ್ಕೆ ತಿರುಗುವ ನೀರವದಲ್ಲಿ
ಸಮಳಿಸಿದ್ದೇನೆ ನಾನು ಅನಿರೀಕ್ಷಿತ

ಧೂಳು ತುಂಬಿದ
ಒಂದೇ ಒ೦ದು ಮಾರ್ಗದಲ್ಲಿ
ಹೋದವರಾರು
ಬಂದವರಾರು
ಎಂಬುದು ಅಸಂಗತ

ಬಯಲ ನಡುವೆ ನಿಂತು
ಕಲ್ಪಿಸುವೆನು ನಾನು
ನನ್ನ ಪೂರ್ವಜರು ನಡೆದ
ಕೆಂಪು ಮಣ್ಣಿನ ದಾರಿ
ಕಾಯುವುದು ನನ್ನ ಸರದಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಣಕದಿರಿ ಕವಿಯ
Next post ಪ್ರೇಮೋನ್ಮಾದ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys